ಮುಂಡಗೋಡ: ಬೈಕ್ ಡಿಕ್ಕಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಂದಿರಾನಗರ ಪ್ಲಾಟ್ ನ ಸೈಯದ ಅಲಿ ಹಸೇನಸಾಬ್ ಬೆಂಡಿಗೇರಿ ಆರೋಪಿಯಾಗಿದ್ದು ಮುಂಡಗೋಡ ಪಟ್ಟಣದ ಹೆಬ್ಬಾರನಗರ ಕ್ರಾಸ್ ಹತ್ತಿರ ಬೈಕ್ ಡಿಕ್ಕಿಯಲ್ಲಿ ಸುಮಾರು 259ಗ್ರಾಂ ಗಾಂಜಾವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮಾದಕ ಪದಾರ್ಥವನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚಿಗೆ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಸಾಗಣೆ ಹೆಚ್ಚುತ್ತಿದ್ದು ಅದರ ಮೂಲದ ಪತ್ತೆಗೆ ಆರಕ್ಷಕ ಇಲಾಖೆ ಮುಂದಾಗಬೇಕಿದೆ.