ಗೋಕರ್ಣ: ಗಂಗೆಕೊಳ್ಳದ ಮೈದಾನದ ಬಳಿ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು ಆರು ಆರೋಪಿಗಳಲ್ಲಿ ಐವರು ಕೈಗೆ ಸಿಗದೆ ಓಡಿ ಹೋಗಿದ್ದು ಓರ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಿನಾಯಕ ತುಕಾರಾಮ ತಾಂಡೇಲ ಹಾಗೂ ತಪ್ಪಿಸಿಕೊಂಡ ಸಂದೀಪ್ ನಾಯ್ಕ್, ರಾಜು ಗೌಡ, ನೀಲಕಂಠ ಗೌಡ, ಸತೀಶ ತಾಂಡೇಲ, ಅಭಿಷೇಕ ತಾಂಡೇಲ ಸಾರ್ವಜನಿಕ ಪ್ರದೇಶದಲ್ಲಿ ಜುಜಾಟದಲ್ಲಿ ತೊಡಗಿದ್ದ ಸಂದರ್ಭ ಗೋಕರ್ಣ ಪೊಲೀಸ್ ಠಾಣೆಯ ಪಿಎಸ್ಐ ಖಾದರ್ ಭಾಷಾ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೃತಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳು ಮತ್ತು ನಗದು ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.