ಕಾರವಾರ: ತಂದೆ ಮತ್ತು ಅಜ್ಜಿಯ ಬಳಿ ಹಣ ಕೇಳಿದಕ್ಕೆ ಸಹೋದರರಿಬ್ಬರ ಮೇಲೆ ಅವರ ಚಿಕ್ಕಪ್ಪ ಹಲ್ಲೆ ಮಾಡಿದ್ದಾರೆ ಎಂದು ಯುವಕರೊಬ್ಬರು ದೂರು ನೀಡಿದ್ದಾರೆ. ತಾಲ್ಲೂಕಿನ ಮಾಜಾಳಿ ಗಾಬೀತವಾಡದ ಶ್ಯಾಮ ಗೋವಿಂದ ಶೇರವಣಕರ ವಿರುದ್ಧ ದೂರು ದಾಖಲಾಗಿದೆ. ಅವರ ಅಣ್ಣನ ಮಗ ಪವನ ರಘುನಂದನ ಶೇರವಣಕರ ದೂರು ನೀಡಿದ್ದಾರೆ. ಪವನ ತನ್ನ ತಂದೆ ಮತ್ತು ಅಜ್ಜಿ ಲಕ್ಷ್ಮಿ ಬಳಿ ಖರ್ಚಿಗೆ ಹಣ ಕೊಡುವಂತೆ ಕೇಳಿದ್ದಾರೆ. ಅವರು ಇಲ್ಲ ಎನ್ನುವಾಗ ಮಧ್ಯ ಬಂದ ಚಿಕ್ಕಪ್ಪ ಶ್ಯಾಮ ಹಣ ಕೇಳಿ ಯಾಕೆ ಗಲಾಟೆ ಮಾಡುತ್ತೀಯ ಎಂದು ಕಟ್ಟಿಗೆ ದೊಣ್ಣೆಯಿಂದ ತಲೆಯ ಹಿಂಬದಿಗೆ ಹಾಗೂ ಎಡಗಣ್ಣಿನ ಹತ್ತಿರ ಹಲ್ಲೆ ಮಾಡಿದ್ದಾರೆ. ಇದನ್ನು ತಪ್ಪಿಸಲು ಬಂದ ಪವನ್ ಅಣ್ಣ ರೋಹಿತ್ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ಚಿಕಿತ್ಸಾ ಕೊಠಡಿಯಲ್ಲಿ ನೀಡಿದ ಪವನ್ ಹೇಳಿಕೆಯ ಮೂಲಕ ದೂರಿದ್ದಾರೆ