Flash News
Monday, August 31, 2026
Logo Flash News
Monday, August 31, 2026
Logo
ಕಂಬದ ವಿಷಯಕ್ಕೆ ವೈಮನಸ್ಸು; ಕಟ್ಟಿಗೆಯಿಂದ ತಲೆಗೆ ಏಟು

ಕಂಬದ ವಿಷಯಕ್ಕೆ ವೈಮನಸ್ಸು; ಕಟ್ಟಿಗೆಯಿಂದ ತಲೆಗೆ ಏಟು

January 05, 2026   |   Flash News

ಗೋಕರ್ಣ: ವಿದ್ಯುತ್ ಲೈನ್ ಕಂಬದ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ವೈಮನಸ್ಸು ಹಲ್ಲೆಗೆ ಕಾರಣವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಆಗಿದೆ. ಗೋಕರ್ಣ ಸಮೀಪದ ಗಂಗೆಕೊಳ್ಳದಲ್ಲಿನ ನಕ್ಷತ್ರ ಬೀಚ್ ಸ್ಟೇಗೆ ಪಡೆದುಕೊಂಡ ವಿದ್ಯುತ್ ಲೈನ್ ಕಂಬದ ವಿಚಾರಕ್ಕೆ ಗಂಗಾವಳಿಯ ಗಣಪತಿ ನಾರಾಯಣ ನಾಯ್ಕ ಮತ್ತು ಭಾವಿಕೊಡ್ಲಾದ ಮನೋಹರ ಸುರೇಶ ಗೌಡ, ಸುರೇಶ ಗೌಡ ನಡುವೆ ಹಿಂದಿನಿಂದ ವೈಮನಸಿತ್ತು. ಶನಿವಾರ ರಾತ್ರಿ ಗಣಪತಿ ನಾರಾಯಣ ನಾಯ್ಕರಿಗೆ ಸೇರಿದ ನಕ್ಷತ್ರ ಬೀಚ್ ಸ್ಟೇ ಆವರಣಕ್ಕೆ ಮನೋಹರ ಸುರೇಶ ಗೌಡ, ಸುರೇಶ ಗೌಡ, ಈಶ್ವರ ಗೌಡ ಮತ್ತು ಪ್ರಶಾಂತ ಗೌಡ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಮೊದಲಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರ ಕೆನ್ನೆಗೆ ಏಟು ಕೊಟ್ಟು, ಕಟ್ಟಿಗೆಯಿಂದ ತನ್ನ ತಲೆಯ ಮೇಲೆ ಹೊಡೆದಿದ್ದಾರೆ ಎಂದು ಗಣಪತಿ ನಾರಾಯಣ ನಾಯ್ಕ  ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.