ಹೊನ್ನಾವರ: ಹೊನ್ನಾವರ ಕಾಸರಗೋಡ ಗ್ರಾಮದಟೊಂಕದಲ್ಲಿನ ಪೊಲೀಸ್ ಹೊರಠಾಣೆಯನ್ನು ಸಿ.ಆರ್.ಝೆಡ್ ಕಾಯ್ದೆಉಲ್ಲಂಘನೆ ಆಧಾರದಲ್ಲಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಅರಣ್ಯ, ಜೀವಪರಿಸ್ಥಿತಿಮತ್ತು ಪರಿಸರ ಇಲಾಖೆ ಅಧೀನಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈಕುರಿತು ಕಾರವಾರದ ಅರಣ್ಯ, ಜೀವಪರಿಸ್ಥಿತಿಮತ್ತು ಪರಿಸರ ಇಲಾಖೆಯ ಪ್ರಾದೇಶಿಕನಿರ್ದೇಶಕರಿಗೆ ಪತ್ರ ನೀಡಲಾಗಿದ್ದು ತೆರವುಗೊಳಿಸಲುಅವರ ಹಂತದಲ್ಲಿಯೇ ಕ್ರಮವಹಿಸಿ ಎಂದು ಸೂಚಿಸಿದ್ದಾರೆ.
ಟೊಂಕದಲ್ಲಿ ತಾತ್ಕಾಲಿಕ ಕಂಟೇನರ್ ಮಾದರಿಯರಾಣಿಯನ್ನು ನಿರ್ಮಿಸಲಾಗಿದ್ದು ಅದನ್ನು ಯಾವುದೇ ಸಂದರ್ಭದಲ್ಲಿತೆರವುಗೊಳಿಸಬಹುದೆಂದು ಹೊನ್ನಾವರ ಪೊಲೀಸ್ ನಿರೀಕ್ಷಕವರದಿಯಲ್ಲಿ ತಿಳಿಸಿದ್ದು ಆದರೆ ಸಿ ಆರ್ಝೆಡ್ ಕಾಯ್ದೆ ಉಲ್ಲಂಘನೆಯಾದ ಬಗ್ಗೆದೂರು ಬಂದ ಹಿನ್ನೆಲೆಯಲ್ಲಿ 1A ವಲಯದಪ್ರದೇಶದಲ್ಲಿ ಹೋರಠಾಣೆ ನಿರ್ಮಿಸಿರುವುದರಿಂದ ಕಾಯ್ದೆ ಉಲ್ಲಂಘನೆಯಾಗಿದ್ದು ತೆರವುಗೊಳಿಸಲುಕ್ರಮ ವಹಿಸುವಂತೆ ಸರ್ಕಾರದ ಅಧೀನಕಾರ್ಯದರ್ಶಿ ಸದಾನಂದ ಆದೇಶ ಹೊರಡಿಸಿದ್ದಾರೆ.
ಟೊಂಕ ಬಂದರು ವಿರೋಧಿಸಿ ಸ್ಥಳೀಯರುನಿರಂತರವಾಗಿ ಹೋರಾಡುತ್ತಿದ್ದು, ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ ಎನ್ನಲಾಗಿದೆ. ಈ ಹಂತದಲ್ಲಿಯೇಸಿ.ಆರ್. ಝೆಡ್ಕಾಯ್ದೆ ಉಲ್ಲಂಘನೆಯ ಅನ್ವಯ ಪೊಲೀಸ್ಠಾಣೆ ತೆರವು ಪ್ರಕರಣವು ಅವರಕಾನೂನು ಹೋರಾಟಕ್ಕೆ ಇನ್ನಷ್ಟು ಬಲನೀಡಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.